ಸೋಮವಾರ, ಆಗಸ್ಟ್ 18, 2014

kolara sindhu raagi thali

ಕೋಲಾರ ಸಿಂಧು ರಾಗೀ ತಳಿ

ಕನ್ನಡದ ಕೃಷಿಬಂಧು ರಾಗೀ ತಳಿ
ಕೋಲಾರ ಸಿಂಧು ರಾಗೀ ತಳಿ||
ನೀನೊಬ್ಬನೇ ಕೃಷಿಯ ಸಿಂಧೂರ ತಿಲಕ
ಈ ನಾಡ ಕೃಷಿಕರಿಗೆ ವರಧಾನ ರಾಜೇಂದ್ರ
ಕರು ನಾಡ ಕೃಷಿಕರಿಗೆ ವರಧಾನ ರಾಗಿ
ಕರು ನಾಡ ಕೇಸರಿ ಜಿ.ಪಿ.ಯು 28
ಸತ್ಯಾ ತಿಳಿ, ದೇಹಪುಷ್ಠಿಯಿದು, ಸರ್ವರೋಗಕ್ಷಯ
ಸಕಲರ ಸಂಜೀವಿನಿ.....
ಕಲಿಯುಗದ..ಕೃಷಿಕರಿಗೆ ಶ್ರೀಮನ್ನಾರಾಯಣ||
ಹಳ್ಳಿಯಲ್ಲಿ ಮೃಷ್ಠಾನ್ನ ರಾಗಿಮುದ್ದೆ
ದಕ್ಷಿಣದ ಮುದ್ದೆ ತಿಂದ ದೇವೇಗೌಡರು
ನಮ್ಮ ದೇಶದ ಪ್ರದಾನಿಯಾಗಿದ್ದು ನಿಜತಾನೆ
ಸಕಲರಿಗೂ ಸನ್ಮಂಗಳವು ಈ ರಾಗಿ||
ಕಲ್ಲುಗಳ ಪುಡಿಮಾಡೆ ರಾಗಿಮುದ್ದೆ ತಿನ್ನು
ವೈರಿಗಳ ಸದೆಬಡಿಯೇ ರಾಗಿಮುದ್ದೆ ತಿನ್ನು
ವಾತ್ಸಲ್ಯ,ಸುಖ-ಶಾಂತಿಗೆ ರಾಗಿ ತಿನ್ನು
ಸಕಲರ ಆರೋಗ್ಯಕೆ ವೈದ್ಯರು ನೀಡುವ
ಸಲಹೇ ರಾಗಿತಿನ್ನು||



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ