ಭಿತ್ತಿದರೇ ರಾಗಿ ತಳಿ ಭಿತ್ತಬೇಕು
ಭಿತ್ತಿದರೇ ರಾಗಿ ತಳಿ ಭಿತ್ತಬೇಕುಉತ್ತಿದರೇ ಕನ್ನಡ ಮಣ್ಣ ಉತ್ತಬೇಕು
ಕೃಷಿಕನ ಬದುಕು ಜೂಜು
ಇದು ಅರಿತೂ ಸಾಗಿದರೆ ಮೋಜು
ಕೃಷಿಕನ ಬದುಕು ಜೂಜು
ಅರಿತೂ ಸಾಗಿದರೆ ಮೋಜು||
ಕಾವೇರಿ ಹೊಳೆಯಾ ನೋಡು...
ಕಪಿಲೆಯ ನೀರಾ ನೋಡು...
ತುಂಗೆಯ ಚೆಲುವಾ ನೋಡು
ಹೇಮಾಳ ಸೊಬಗೂ ನೋಡಿ
ಹೆಮ್ಮೇಲಿ ನೀ ಹಾಡು||
ಕೋಟಿಲಿಂಗನ ಎಣಿಸೋರು ಯಾರು?
ಮೇಲ್ಕೋಟೆ ಚೆಲುವಾನಾ ಬಣ್ಣಿಸೋರು ಯಾರು?
ಕೈವಾರ ತಾತನೋರ ಬಯ್ಯೋರು ಯಾರು?
ಅಂಗೇಯಾ ಈ ರಾಗೀನ ಎಣಿಸೋದು ಬ್ಯಾಡಾ!
ನೂರೆಂಟು ಯೋಚ್ನೆ ಬ್ಯಾಡಾ,
ಮಳೆ ಗಿಳೆ ಕಡಿಮೆ ಆದ್ರೂ
ರಾಗೀನ ನಂಬಿದ್ರೇ
ಆ ರಾಘವೇಂದ್ರ ಕಾಪಾಡ್ವ
ಆ ರಾಘವೇಂದ್ರ ಕಾಪಾಡ್ವ||
ಊರೂರು ಸುತ್ತುವೆ ಏಕೆ?
ಪಡಬಾರ್ದ ಪಾಡು ಪಡುವೆ
ಏನೆಲ್ಲ ಸಂಕಟ ಸಾಕು, ಈ ರಾಗೀನ ಭಿತ್ತಿದ್ರೆ
ಆ ವೆಂಕಟನೇ ಕಾಪಾಡ್ವ||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ