ಕನ್ನಡದಾ ರೈತರೆಲ್ಲಾ ಒಂದಾಗಿ ಕೇಳಿ
ಕನ್ನಡದಾ ರೈತರೆಲ್ಲಾ ಒಂದಾಗಿ ಕೇಳಿರಾಗಿತಳಿಯ ಬೆಳೆಸಲು ಅಲ್ಪ ಮಳೆಯೆ ಸಾಕು||
ಕೃಷಿತನವೇ ದೇಶದ ಬುನಾದಿ ಮರೆಯಬೇಡಿ
ಮೌಢ್ಯಮೂಲನಂಬಿಕೆಗಳ ದಾಸರಾಗಬೇಡಿ||
ಅಂದು ಜನರು ದೃಢಕಾಯರಾಗಲು ರಾಗಿಬೆಳೆಯೆ ಕಾರಣ
ಅಂದು ಜನರು ಸದೃಢರಾಗಲು ರಾಗಿಮುದ್ದೆ ಕಾರಣ||
ಕೀಳು ಮಾತನಾಡುವವರ ಕಣ್ತೆರೆಯಿರೆನ್ನಿ
ಕೀಳು ಮಾತನಾಡುವವರ ಬಾಯ್ಮುಚ್ಚಿ ಬನ್ನಿ||
ರಾಗಿ ಬೆಳೆಸಿರೆಲ್ಲರು ಅದು ನಾಡಿಗೇ ಹಿತಕರ
ತಕರಾರು,ತಗಾದೆ,ಒಳಜಗಳ ತಗ್ಗಲು
ಯುವಶಕ್ತಿಯೆ ಬೇಕಿದೆ
ಯುವಶಕ್ತಿಯ ಬೆನ್ನೆಲುಬಿಗೆ ರಾಗಿಮುದ್ದೆ ಅವಶ್ಯವು||
ಕೋಲಾರ,ಚಿಕ್ಕಬಳ್ಳಾಪುರ,ಮೈಸೂರು,ಬೆಂಗಳೂರು
ತುಮಕೂರು ಜಿಲ್ಲೆಗಳೆ ರಾಗಿ ಸಾಂದ್ರತೆ
ಕುರುಕ್ಷೇತ್ರ ಸೂತ್ರನು ಶ್ರೀ ಕೃಷ್ಣನ ಬಣ್ಣವು
ಸಂಗೀತದ ನಾದನು ಕೋಗಿಲೆಯ ಬಣ್ಣವು
ಯಾರಿಗಿಲ್ಲ ಹಿತಕರ ?
ಮತ್ತದೋ ಬರುತಿದೇ ಪ್ರಪಂಚ ಮಹಾಯುದ್ಧವು
ಪ್ರಚಂಢಶಕ್ತಿ ನಮ್ಮಲಿದ್ದರೆ ವೈರಿ ದೂರಓಡುವಾ
ಜನಮಾನ್ಯರಾಗಲು,ವಿಶ್ವಮಾನ್ಯರಾಗಲು,
ರಾಗಿ ಬೆಳೆಸಿರೆಲ್ಲರೂ,ರಾಗಿ ಬೆಳೆಸಿರೆಲ್ಲರೂ||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ