ಕರು ನಾಡ ತಾಯಿ......ರಾಗಿ ತಳಿ
ಕರು ನಾಡ ತಾಯಿ......ರಾಗಿ ತಳಿಈ ಸಸ್ಯವು......ನಮ್ಮ ಸಂಜೀವಿನಿ
ಹೃದಯಕೆ ತಂಪು ಇದು....ಮನಕೆ ಶಾಂತಿ ಇದು...||
ವೀರ ಶೂರರಾಗಲು...ರಾಗಿ ತಿನ್ನಿರೆಲ್ಲರು
ಶಾಂತಿದೂತರೆನಿಸಲು...ರಾಗಿ ತಿನ್ನಿರೆಲ್ಲರು
ವರನಟನು ಸಾರ್ವಭೌಮನಾಗಲು ರಾಗಿ ತಿಂದದ್ದು
ಆ ದೇವೇಗೌಡರು ಪ್ರದಾನಿಯಾಗಲು ರಾಗಿ ಕಾರಣ
ಸಾಮರ್ಥ್ಯವಿದ್ದಲ್ಲಿ ಸಾಮ್ರಾಜ್ಯವು||
ಜೀವ ಸಂಜೀವಿಯಾಗಲು.... ರಾಗಿ ತಿನ್ನು ನೀ
ಎಲ್ಲಾ ಆಂಜನೇಯರಾಗಲು....ರಾಗಿ ತಿನ್ನು ನೀ
ಸೌಂದರ್ಯ,ಸದೃಢತೆಗೆ ..ರಾಗಿ ಅವಶ್ಯವು
ಆಂತರ್ಯ,ಧಾರ್ಢ್ಯತೆಗೆ..ರಾಗಿ ಅವಶ್ಯವು
ಕರಿಮೆಟ್ಟಿಸೆಣೆಸಿದ ರಾಗಿನಾಡು ನಮ್ಮದು||
ರವಿಯೇ ಬರಲಿ ಆ ಚಂದ್ರನೇ ಬರಲಿ
ಕಡೆಗೇ ಆ ಇಂದ್ರನೆ ಬಂದರೂ
ನಾ ಕೇಳುವೆ ವರವಾ.....
ರಾಗಿ ಬೆಳೆವ ನಾಡದು ಬೇಕು..
ರಾಗಿ ಬೆಳೆವ ಕೃಷಿಕ ನಾನಾಗಬೇಕು||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ